ಮನಃಸ್ಸಾಕ್ಷಿ

ಸದಾ ನನ್ನ ಮನದೊಳಗೆ
ಮಿಡಿಯುತಿರು ಸಾಕ್ಷಿಯೇ
ಸದಾ ನನ್ನ ಕಿವಿಯೊಳಗೆ
ನುಡಿಯೇ ಮನಃಸಾಕ್ಷಿಯೇ

ನನ್ನ ನಾಲಿಗೆಯಲಿ ಇರು ನೀನು
ನನ್ನ ನಗೆಯಲ್ಲಿ ಇರು ನೀನು
ಸದಾ ನನ್ನ ಬಗೆಯಲ್ಲಿರು
ಸದಾ ನನ್ನ ಬೆಳಕಾಗಿರು

ಕಣ್ಗುರುಡ ನಾ ಕಾಣದೆಯೇ
ತಪ್ಪು ಹೆಜ್ಜೆಯಿಡುವಾಗ
ನ್ಯಾಯ ಯಾವುದನ್ಯಾಯ ಯಾವುದು
ಸತ್ಯ ಯಾವುದಸತ್ಯ ಯಾವುದು
ಹಿತ ಯಾವುದಹಿತ ಯಾವುದು
ಪುಣ್ಯ ಯಾವುದು ಪಾಪ ಯಾವುದು
ಎಂದು ನಾ ತಿಳಿಯದಾಗ

ಅನ್ಯತ ನಾನು ನುಡಿಯದಂತೆ
ಇರು ನನ್ನ ಮಾತಿನಲಿ
ಯಾರ ಮೇಲೂ ಎರಗದಂತೆ
ಇರು ನನ್ನ ಕೈಗಳಲಿ
ಭಾವವೆಂದೂ ತಪ್ಪದಂತೆ
ಇರು ನನ್ನ ಭಾವನೆಯಲಿ

ಅಂತರ್‍ಯಾಮಿ ನೀನೇ ನನ್ನ
ಸರ್‍ವಸಾಕ್ಷಿ ನೀನೇ ನನ್ನ
ಬೇರೆ ನನಗೆ ದೈವವಿಲ್ಲ
ಬೇರೆ ನನಗೆ ಧರ್ಮವಿಲ್ಲ

ಮೃದುವಾಗಿಸು ನನ್ನ ಮಾತ
ಕರುಣೆಯಾಗಿಸು ನನ್ನ ಕಣ್ಣ
ಪ್ರೀತಿಯಾಗಿಸು ನನ್ನ ತುಟಿಯ
ಶಾಂತಿಯಾಗಿಸು ನನ್ನ ಮುಖವ

ಓ ನನ್ನ ಸಾಕ್ಷಿ
ಮನಃಸ್ಸಾಕ್ಷಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ಯ ವಿವಾಹಗಳ ಕಥೆ
Next post ಕೊನೆಯ ವಿದಾಯ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys